ಕೆಆರ್ ಸಿಎಲ್ ( ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ) ಅನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕು ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಕರ್ನಾಟಕದ ಕರಾವಳಿ ಭಾಗದ ಜನರ ಆಶೋತ್ತರಗಳನ್ನು ಸಫಲಗೊಳಿಸುವಲ್ಲಿ ಕೆಆರ್ ಸಿಎಲ್ ವಿಫಲವಾಗಿರುವುದರಿಂದ ಇದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವುದು ಸೂಕ್ತ ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೆಆರ್ ಸಿಎಲ್ ವಿಫಲವಾಗಿರುವುದರಿಂದ ಇದನ್ನು ನೈರುತ್ಯ ರೈಲ್ವೆ ( ಕರ್ನಾಟಕ ಗೋವಾ) ಹಾಗೂ ಕೇಂದ್ರೀಯ ರೈಲ್ವೆ ( ಮಹಾರಾಷ್ಟ್ರ) ನಿಯಂತ್ರಣಕ್ಕೆ ನೀಡುವುದು ಸೂಕ್ತ ಎನ್ನುವುದು ಕರಾವಳಿ ಕರ್ನಾಟಕ ಭಾಗದ ಬಹಳ ವರ್ಷಗಳ ಬೇಡಿಕೆ ಎಂದು ತಿಳಿಸಿದ್ದಾರೆ.